Skip to main content

ಗುರಸ್ಮರಣೆಗೆ ಬಂದ ಮಿತ್ರರ ಕುರಿತು

ಸೊರಬದ ಮುನಿಸಿಪಲ್ ಹೈಸ್ಕೂಲಿನಲ್ಲಿ  ಕನ್ನಡ ಪಂಡಿತರಾಗಿದ್ದ ನಮ್ಮ ಪೂಜ್ಯ ಗುರುಗಳಾದ  ವಿದ್ವಾಂಸರಾದ 
ಶ್ರೀ ವೆಂಕಟರಾಮ ಭಟ್ಟರವರ ಸ್ಮರಣಾರ್ಥವಾಗಿ "ಸಾರಸ್ವತ" ಸಂಸ್ಮರಣ ಗ್ರಂಥ ಬಿಡುಗಡೆಗಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೩೦/೩/೨೦೧೯ ರಂದು ನಡೆದ ಸಮಾರಂಭಕ್ಕೆ ಬಂದ ಮಿತ್ರರನ್ನು ಕುರಿತ ಅಂದಿನ ಆಶು ಕವಿತೆ.

ಗುರುವ ಸ್ಮರಣೆಗೆ  ಬಂದಿಹ  ಮಿತ್ರರೇ
ಗೊತ್ತು ನನಗೂ ನಿಮಗೂ ಈ ಹೊತ್ತು

ಆಗುತಿದೆ ಸಂತೋಷವೋ ದುಗುಡವೋ
ಕಾಣುತಿದೆ ಎಲ್ಲೆಲ್ಲಿ ಅದೇನು ಸಡಗರವೋ 

ಇಂದು ಸಂಜೆಯ ಈ ಸಂತಸದ ಮುಖಗಳು,
ಕಂಡಾಗ ಎನಿಸದೆ ಇವರೆಲ್ಲ ಎಷ್ಟು ಸುಖಿಗಳು

ಯೋಚಿಸುತ್ತಾ ಕಂಡಾಗ ಹಲವು ಬಾಡಿವೆ,ಬಳಲಿವೆ,
ಒಂದಂತೂ ಸತ್ಯ ತೋರಿದಂತಲ್ಲ ಇದುವೇ ನಿತ್ಯ

ನಿಗಿನಿಗಿ ಮುಖದಲ್ಲಿ ನಗುವನ್ನು ತಂದು
ಪರಿಚಯವ ಹುಡುಕುತಿಹರು ಕಾತುರದಿ ಇಂದು

ಪರಿಚಯದ ವದನ ಕಂಡರೆ ಅದೇನೋ ಹಿತ
ಅವರೇ ಮಾತನಾಡಿಸಿದರೆ ಯಾರೆಂದು ಯೋಚಿಸುತ

ಮತ್ತೆ ಸಿಗಲಾರದ ಊರಾಚೆಯ ಹಲವು ಮಿತ್ರರು
ಬೇಡವೆಂದರೂ ಕಾಣುತಿಹ ನಮ್ಮೂರ ಹಿತಶತೃರು

ಸಂವತ್ಸರದ ಚಕ್ರ ಒಮ್ಮೆ ಸುತ್ತಿದವರೇ ಎಲ್ಲಾ
ಬಾಳಿನ ಹಾದಿಯಲಿ ಹೂವು ಮುಳ್ಳನೆ ಕಂಡಿರೆಲ್ಲಾ 

ಆಗಿರುವಿರಿ ಉದ್ಯೋಗಿಯೋ ಮಾಲೀಕರೋ
ಬದುಕು ನೀಗಲು ಹತ್ತು ಹಲವು ಪಾತ್ರಗಳು

ಮತ್ತೆ ಸೋಲು ಗೆಲುವಿನ ವ್ಯವಹಾರಗಳು 
ಜೀವ ಭಾವದಿ ಹರ್ಷ ದುಃಖದ ನಿಮಿಷಗಳು,
 
ಕಂಡಿರುವಿರಿ ಸಮಾಜದ ಹಂತಗಳು, ಅಂತಸ್ತು ಗಳು,
ಮಾನಗಳು ಅವಮಾನಗಳು ಕುಟುಂಬ ಸೌಖ್ಯಗಳು

ಎದುರಿಸಿರುವಿರಿ ಹಿರಿಯ ಕಿರಿಯರ ತರಹ ಭಾವಗಳು
ಒಬ್ಬೊಬ್ಬರದು ಒಂದೊಂದು ರೀತಿಯ ಸುಖವೇ

ಯಾರದೂ  ಹೊರತಲ್ಲ ಎಂದು ಕೊಂಡಂತೆ ದುಃಖ
ಗುರುವಿನ ಚರಿತೆಯನು ಓದಿದಿದರೇ ಹೇಗೆ

ಅಷ್ಟೋಂದು ನಮದಲ್ಲ ಬದುಕಿನ ಬೇಗೆ
ಸಾರ್ಥಕತೆಯ  ಹಾದಿ ಇರುವುದೇ ಹೀಗೆ

ಇದ್ದೇ ಇರುತವೆ ಎಲ್ಲರಿಗೂ ಹಲವಾರು ಕೆಲಸ
ಬದಿಗಿಟ್ಟು ಬಂದು ಕಳೆದಿರಿ ಒಂದು ದಿವಸ

ಕಾರಣವು ಯಾವುದಿದೋ ಪಡೆವ ಸಂತಸಕೆ
ಬಿಡದಿರಲಿ ಮನ ಖುಷಿಯ ಪಡೆಯುವುದಕೆ

ಶಾಂತಿಯಿರಲಿ ,ಸುಖವಿರಲಿ, ನೆಮ್ಮದಿಯಿರಲಿ
ಬಾಳಿನಲಿ ಆರೋಗ್ಯವಂತೂ ಸದಾ ನಿಮಗಿರಲಿ.


Comments

  1. ಸತ್ಯ.. ಅದೊಂದು ಅವಿಸ್ಮರಣೀಯ ಸನ್ನಿವೇಶ.. ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ನೈಜವಾಗಿ ಬಿಂಬಿಸುವ ಕವನ.. ಧನ್ಯವಾದಗಳು🙏

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...