Skip to main content

ತಿರುವನಂತಪುರಂ,ಕಾಲಟಿ, ಗುರುವಾಯೂರು, ವಯನಾಡ್

ಮಧ್ಯಾಹ್ನದ ಊಟದ ಬಳಿಕ ನಮ್ಮ ಯಾತ್ರೆ ಮುಂದುವರಿದು ತಿರುವನಂತಪುರಂ ಸೇರಿದಾಗ ಸಮಯ ಮಧ್ಯಾಹ್ನ ೪ ಘಂಟೆ.ಈ ನಗರವು ಕೇರಳದ ರಾಜಧಾನಿ ಆಗಿದ್ದು ‌ಭಾರೀ ಸಂಖ್ಯೆ ಯ ಆಭರಣಗಳ, ವಿವಿಧ ಕಲಾಕೃತಿಗಳ,ವೈಭವದ ಬಟ್ಟೆಗಳನ್ನು ಅಂಗಡಿಗಳಲ್ಲಿ ನೋಡ ಬಹುದಾಗಿದೆ.ಇಲ್ಲಿನ ಸುಪ್ರಸಿದ್ಧ ತಿರುವನಂತಪುರಂ ದೇವಾಲಯ ಹೆಸರಿನಂತೆ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವಾಗಿದ್ದು  ಶಯನನಾಗಿ ಬಲಗೈಲಿ ಶಿವಲಿಂಗಾಕಾರದ ಕಮಂಡಲವನ್ನು ಹಿಡಿದು ಕೊಂಡಿದ್ದಾನೆ.ಈ ವಿಗ್ರಹವು ೧೮ ಅಡಿ ಉದ್ದವಾಗಿದ್ದು ಮೂರು ಬಾಗಿಲುಗಳ ಮೂಲಕ ನೋಡಬೇಕಾಗಿದೆ. ನಾಭಿಯಿಂದ ಬಂದಿರುವ ಬ್ರಹ್ಮ ನನ್ನೂ ಕಾಣಬಹುದು.ದೇವಸ್ಥಾನ ಪ್ರವೇಶಿಸಲು ನಿಗದಿತ ಸಮಯ,ವಸ್ತ್ರಸಂಹಿತೆ ಯ ಕಡ್ಡಾಯ ಆಚರಣೆ ಯಾತ್ರಿಕರಿಗೆ ಅಷ್ಟೇ ಅಲ್ಲ.ಅಲ್ಲಿ ಕೆಲಸ ಮಾಡುವ ರಕ್ಷಣಾ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.ಇಲ್ಲಿನ ಕಾರ್ಯಕ್ರಮ ದ ನಂತರ ಸಮೀಪದ ಕೊಲ್ಲಂ ನಲ್ಲಿ ರಾತ್ರಿ ಊಟ ವಾಸ್ತವ್ಯ.

ಶನಿವಾರದಂದು ಮುಂಜಾನೆಯೇ ಆದಿ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿ ಕ್ಷೇತ್ರದತ್ತ ಪಯಣ.ಮಾರ್ಗಮಧ್ಯೆ ದೊರೆತ ಶರವಣ ಭವನದಲ್ಲಿ ಉಪಹಾರ.ಆದಿ ಶಂಕರಾಚಾರ್ಯರ ಜನ್ಮಸ್ಥಳ,ತಾಯಿ ಆರ್ಯಾಂಬ ರವರ ಸಮಾಧಿ ಸ್ಥಳ,ಶ್ರೀ ಶಾರದಾ ಮತ್ತು ಸುತ್ತ ಸಪ್ತಮಾತೃಕೆಯರಾದ ಬ್ರಾಹ್ಮೀ, ಮಾಹೇಶ್ವರಿ, ಕೌಮಾರೀ, ವೈಷ್ಣವಿ, ವಾರಾಹಿ,ನಾರಸಿಂಹಿ, ಇಂದ್ರಾಣಿಯರ ಪುಟ್ಟ ಪುಟ್ಟ  ದೇವಾಲಯಗಳು ಆಕರ್ಷಕವಾಗಿದೆ. ಶ್ರೀ ಶಂಕರರು ಚಿಕ್ಕವರಿದ್ದಾಗ ಪೂರ್ಣಾ ಎಂಬ ನದಿಯು ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದ್ದು ಅವರ ತಾಯಿಗೆ ಪ್ರತಿ ದಿನ ಪ್ರಯಾಸದಿಂದ ಹೋಗಿ ಬರುತ್ತಿದ್ದರು.ಒಂದು ದಿನ ಹಾಗೆ ಹೋಗಿ ಬರುವಾಗ ಕುಸಿದು ಬಿದ್ದರು.ಇದನ್ನು ಕಂಡು ಮನ ಕರಗಿ ಕುಲದೈವ ಕೃಷ್ಣ ನಲ್ಲಿ ಬಾಲ ಶಂಕರರು ಪ್ರಾರ್ಥಿಸಲಾಗಿ ನಿನಗೆ ಬೇಕಾದ ಜಾಗದಲ್ಲಿ ಗುರುತು ಮಾಡು. ಅಲ್ಲಿಗೇ ನದಿ ಹರಿಯುತ್ತದೆ ಎಂದು ಪರಿಹಾರ ಹೇಳಿದುದರಿಂದ ಶಂಕರರು ಮನೆಯ ಬಳಿಯಲ್ಲಿ ಕಾಲಿನಿಂದ ಗುರುತು ಮಾಡಿ ನೀರು ಹರಿಸಿದರು.ಇದರಿಂದಾಗಿ ಆ ಸ್ಥಳಕ್ಕೆ ಕಾಲಡಿ ಎಂಬ ಹೆಸರು ಬಂದಿತು.
ಶ್ರೀ ಶಂಕರರ ಕುಲದೇವತೆ ಕೃಷ್ಣನ ದೇವಾಲಯ, ಪೂರ್ಣಾ ನದಿ ದರ್ಶನ ಮಾಡಿದೆವು.ಅನತಿ ದೂರದಲ್ಲಿರುವ ಕಂಚಿ ಕಾಮಕೋಟಿ ಸ್ವಾಮಿಯವರು ಕಟ್ಟಿಸಿರುವ ಅಧ್ವೈತ ಸಿದ್ಧಾಂತ ಪ್ರವರ್ತಕ ಆದಿಶಂಕರರ ಜೀವನ ಪರಿಚಯ ಮಾಡಿಸುವ ಎಂಟು ಅಂತಸ್ತಿನ ಕೀರ್ತಿ ಸ್ಥಂಭ ವಿದೆ. (ಪ್ರತಿ ಚಿತ್ರದ ವಿವರಗಳು ತಮಿಳು, ತೆಲುಗು, ಇಂಗ್ಲಿಷ್ ಹಾಗೂ ಕನ್ನಡದಲ್ಲಿದ್ದು ಗೂಗಲ್ ನಲ್ಲಿ ಬರುವ ಕನ್ನಡ ಅನುವಾದ ತಪ್ಪು ತಪ್ಪಾಗಿ ರುತ್ತದೆ). 
ಇಲ್ಲಿನ ಪೂಜೆಯ ನಂತರ ಗುರುವಾಯೂರು ದೇವಸ್ಥಾನಕ್ಕೆ ಪಯಣ.ಹಿಂದೆ ದ್ವಾರಕಾ ನಗರವು ನಶಿಸುತ್ತಿರುವ ಸಮಯದಲ್ಲಿ ಶ್ರೀ ಕೃಷ್ಣನು ತನ್ನ ಮೂರ್ತಿಯನ್ನು ದಕ್ಷಿಣ ತೀರದ ಕುರುವೈ ಸಮುದ್ರ ದಡದಲ್ಲಿ ತನ್ನ ಸ್ಥಾಪನೆ ಮಾಡಬೇಕೆಂದು ದೇವಗುರು ಬೃಹಸ್ಪತಿ ಮತ್ತು ವಾಯುದೇವರಿಗೆ ತಿಳಿಸಲಾಗಿ ಅವರು ಅದರಂತೆ ಆ ದೇವರನ್ನು ಸ್ಥಾಪಿಸಿದರು.ಹಾಗೆ ಸ್ಥಾಪನೆ ಮಾಡಿದ ಗುರು ಮತ್ತು ವಾಯುಗಳ ಹೆಸರಿನಲ್ಲಿ ಆ ಪ್ರದೇಶವು ಕರೆಯಲ್ಪಟ್ಟಿತು ಎಂದು ಸ್ಥಳ ಮಹಾತ್ಮೆ ತಿಳಿಸುತ್ತದೆ.ಈ ಭಾಗದಲ್ಲಿ ಸುಮಾರು ೨೫೦೦ವರ್ಷಗಳ ಹಿಂದೆ ಧರ್ಮವನ್ನು ಪದ್ಧತಿ ಗಳನ್ನು ಕಠಿಣವಾಗಿ ಪಾಲಿಸುತ್ತಿದ್ದ ಬ್ರಾಹ್ಮಣರು ವಾಸವಾಗಿದ್ದ ಇತಿಹಾಸ ವಿದೆ.ಇಂದಿಗೂ ಅವರಿಂದಲೇ ಪೂಜಾ ಕೈಂಕರ್ಯಗಳು ಬಲು ಶಿಸ್ತು ಬದ್ಧವಾಗಿ ನಡೆದುಕೊಂಡು ಬರುತ್ತಿದೆ.ದೇವರ ವಿಗ್ರಹವು ಅತಿ ಚಿಕ್ಕದಾದರೂ ಮಹಿಮೆ ಹೆಚ್ಚಿದ್ದು ದೇಶದ ಎಲ್ಲಾ ಪ್ರಾಂತ್ಯ ಗಳಿಂದ ದಿನ ನಿತ್ಯವೂ ಭಕ್ತರು ಬರುತ್ತಿದ್ದಾರೆ. ದೇವಾಲಯ ಪ್ರವೇಶ ಹಿಂದೂಗಳಿಗೆ ಮಾತ್ರವಿದ್ದು ವಸ್ತ್ರಸಂಹಿತೆ ಕಡ್ಡಾಯ. ನಾವು ಸಂಜೆ ಐದು ಘಂಟೆಗೇ ಸರತಿಯಲ್ಲಿ ನಿಂತರೂ ದೇವರ ದರ್ಶನ ವಾಗಲು ರಾತ್ರಿ ಎಂಟು ಘಂಟೆಯಾಗಿತ್ತು. ನಂತರ ಹೋಟೆಲ್ನಲ್ಲಿ ಊಟ, ವಿಶ್ರಾಂತಿ.
ಭಾನುವಾರ ಸೃಷ್ಟಿ ಸೌಂದರ್ಯದ ವಯನಾಡಿನತ್ತ ಹೊರಟೆವು.ಹಸಿರು ಹೊತ್ತ ಆಳವಾದ ಕಂದರಗಳು, ಬೆಟ್ಟ ಗುಡ್ಡಗಳ ಸಾಲು, ಔಷಧಿ ಸಸ್ಯಗಳ ಪ್ರದರ್ಶನ ಗಳು, ಚಹಾ ತೋಟಗಳು,ಗಿರಿಸಾಲುಗಳ ಮಧ್ಯೆ ಹಾದುಹೋಗುವ ಮಾರ್ಗ ಗಳು ಅಪಾಯಕಾರಿ ತಿರುವುಗಳು ಎಲ್ಲಾ ರುದ್ರ ರಮಣೀಯ. ಶತಮಾನದ ಹಿಂದೆ ಇದ್ದ ದಟ್ಟ ಅರಣ್ಯದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬನು ಆದಿವಾಸಿ ನಾಯಕನಿಂದ ಈ ಅರಣ್ಯದಲ್ಲಿ  ಮಾರ್ಗ ದರ್ಶನ ಪಡೆದು ಅನುಕೂಲ ಮಾಡಿಕೊಂಡನು.ಬ್ರಿಟಿಶರ ಸಹಜ ದುರ್ಬುದ್ಧಿ ಯಿಂದ  ಈ ಆದಿವಾಸಿ ಯಿಂದ ಭವಿಷ್ಯದಲ್ಲಿ ತೊಂದರೆ ಯಾಗ ಬಹುದೆಂಬ ಭಯದಿಂದ ಅವನ ಕೊಲೆ ಮಾಡಿಸಿದನೆಂದೂ ಮೃತನಾದ ಆದಿವಾಸಿ ಯು ಇಲ್ಲಿ ನಡೆದಾಡುವ ಜನರಿಗೆ ಪ್ರೇತನಾಗಿ ಕಾಡುತ್ತಿದ್ದುದರಿಂದ ಮಾಂತ್ರಿಕರೊಬ್ಬರ ಸಹಾಯದಿಂದ ಆ ಪ್ರೇತವನ್ನು ಬಂಧಿಸಿ ಮರಕ್ಕೆ ಕಟ್ಟಿ ಹಾಕಿ ಸಮಸ್ಯೆ ಪರಿಹಾರ ವಾಯಿತೆಂದೂ ಪ್ರತೀತಿ ಇದೆ.ಹಾಗೆ ಕಟ್ಟಿದ ಮರ ಹಾಗೂ ಸರಪಳಿಯನ್ನು ನೋಡಬಹುದಾಗಿದೆ.ಈ ಸೃಷ್ಟಿ ಸೌಂದರ್ಯವನ್ನು ಸವಿಯಲು ಅವಕಾಶ ಮಾಡಿದವರಿಗೊಂದು ಧನ್ಯವಾದ.ಮಾರ್ಗ ಮಧ್ಯೆ ದೊರೆತ ಉಡುಪಿ ಗ್ರ್ಯಾಂಡ್ ಪ್ಯಾಲೇಸ್ ಹೋಟೆಲ್ ನಲ್ಲಿ ಭೋಜನ.ವಿಷ್ಣುವಿನ ವಾಮನಾವತಾರದಲ್ಲಿ ಕೊಟ್ಟ ಮಾತಿನಂತೆ  ತಲೆ ಮೇಲೆ ಕಾಲಿಡಿಸಿಕೊಂಡು ಅದನ್ನೇ ದಾನ ಮಾಡಿದ , ದೀಪಾವಳಿಯ ಬಲಿ ಪಾಡ್ಯಮಿಯನ್ನು ಶಾಶ್ವತ ಮಾಡಿದ, ಪುರಾಣದ ಮಹಾದಾನಿ ಖ್ಯಾತಿಯ  ಮಹಾಬಲಿ.ಇವನ ಮಗ ಬಾಣಾಸುರ ಮುಂದಿನ ಹಲವಾರು ವರ್ಷಗಳನ್ನು ಪ್ರಜಾವತ್ಸಲನಾಗಿ ಯಶಸ್ವಿಯಾಗಿ ರಾಜ್ಯವಾಳಿದ.ಅವನ ಹೆಸರಿನ ಪರ್ವತ ಸಾಲು ಇದೆ.ಇಲ್ಲಿಯೇ ಹುಟ್ಟಿ ಹರಿಯುವ ಭಾರೀ ನೀರಿಗೆ ಕಲ್ಲು ಮಣ್ಣುಗಳ ಬೃಹತ್ ಒಡ್ಡು ನಿರ್ಮಾಣ ಮಾಡಿ ನೀರು ಹಿಡಿದಿಟ್ಟುಕೊಂಡಿದ್ದಾರೆ.ಈ ರೀತಿಯ ಒಡ್ಡು ಅಥವಾ ಡ್ಯಾಂ ಏಷಿಯಾ ದಲ್ಲೇ ಎರಡನೇಯದು ಎಂಬ ದಾಖಲೆ.ಈ ಡ್ಯಾಂ ನ ದಂಡದ ಮೇಲೆ  ದೊಡ್ಡದೆನಿಸುವ ಸೌರ ಶಕ್ತಿ ಸ್ಥಾವರ ವಿದೆ.ಇದಲ್ಲದೆ ಈ ಕಬಿನಿ ಜಲಾಶಯದಿಂದ ಜಲವಿದ್ಯುತ್ ತಯಾರಾಗುತ್ತದೆ. ಈ ಪ್ರಕೃತಿ ಸೌಂದರ್ಯದ ಸನಿಹ ಆಟ ನೋಟಗಳಿಗೆ ಸಮೃದ್ಧ ಅವಕಾಶವನ್ನು ಮಾಡಿದ್ದಾರೆ.ಇಲ್ಲಿಂದ ಸ್ವಲ್ಪವೇ ದೂರದಲ್ಲಿ ವಯನಾಡ್ ನ ಜಿಲ್ಲೆಯ ರಾಜಧಾನಿ ಕಲ್ಪೆಟ್ಟ ಎಂಬಲ್ಲಿ ನಮ್ಮ  ರಾತ್ರಿಯ ವಾಸ್ತವ್ಯ.
ಮರುದಿನ ನವೆಂಬರ್ ೩೦.ಬೆಳಿಗ್ಗೆ ಉಪಾಹಾರದ ನಂತರ ನಂಜನಗೂಡು ನಂಜುಂಡೇಶ್ವರ ದರ್ಶನ ಪೂರೈಸಿ ಶ್ರೀರಂಗಪಟ್ಟಣದ ಶ್ರೀರಂಗ ದರ್ಶನ.ಮಧ್ಯಾಹ್ನದ ಭೋಜನದ ನಂತರ ಬೆಂಗಳೂರು ತಲುಪಿದೆವು.

Comments

  1. ಪ್ರಿಯ ರಾಮಚಂದ್ರ,

    ನೀವು ಈ ಯಾತ್ರೆಯನ್ನು ಕೈಗೊಂಡಿದ್ದು ತಿಳಿದಿರಲಿಲ್ಲ.
    ಅನಂತಪದ್ಮನಾಭನ ಮತ್ತು ಗುರುವಾಯೂರಪ್ಪನ ಪುಣ್ಯದರ್ಶನ ಗಳಿಸಿ ಕೃತಾರ್ಥರಾದಿರಿ!
    ಕಾಲಟಿ ಕ್ಷೇತ್ರದ ಹೆಸರಿನ ಹಿನ್ನೆಲೆ ತಿಳಿದಿರಲಿಲ್ಲ.......
    ನಿಮ್ಮೀ ಕಥನ ಮೊದಲ ಕಂತು ಅಲ್ಲ ಎಂದು ತಿಳಿಯುತ್ತೇನೆ. ಹಿಂದಿನ ಕಂತುಗಳಿಗಾಗಿ ಹುಡುಕಾಟ ನಡೆಸುತ್ತೇನೆ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...