ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ಅಧಿಕಾರದ ವ್ಯಾಪ್ತಿಯಲ್ಲಿ ತಂದಿರುವ ಸುಗ್ರೀವಾಜ್ಞೆ ಲಕ್ಷಾಂತರ ಠೇವಣಿದಾರರಿಗೆ ಸಮಾಧಾನ ತರುವ ವಿಷಯ ಸಹಕಾರಿ ಬ್ಯಾಂಕುಗಳು ಎಂದರೆ ಅವುಗಳು ಕೆಲವರ ಹಿತಕ್ಕಾಗಿಯೇ ಸ್ಥಾಪಿತವಾಗಿದೆಯೇನೋ ಎಂಬ ಅಭಿಪ್ರಾಯ ಬರುವಂತೆ ಅವು ಹಲವು ಶ್ರೀಮಂತರು, ರಾಜಕೀಯ ವ್ಯಕ್ತಿಗಳ ನೇತೃತ್ವದಲ್ಲಿಯೇ ನಡೆಯುತ್ತಿದೆ. ಕೆಲವು ಸಂಘ-ಸಂಸ್ಥೆಗಳ ಹೆಸರಿನಿಂದ ಪ್ರಾರಂಭವಾಗುವ ಈ ಬ್ಯಾಂಕುಗಳು ಆಯಾ ರಾಜ್ಯದ ಸಹಕಾರಿ ಕಾನೂನಿನನ್ವಯ ನೋಂದಣಿಯಾಗಿರುತ್ತವೆ. ಆರಂಭದಲ್ಲಿ ಪ್ರಾಮಾಣಿಕ ಮುಂದಾಳುಗಳ ಆಡಳಿತ ವಿರುವುದರಿಂದ ಸಹಕಾರಿ ಬ್ಯಾಂಕ್ ಅಚ್ಚುಕಟ್ಟಾಗಿ ಕೆಲವು ವರ್ಷಗಳು ನಡೆಯುತ್ತದೆ. ಒಮ್ಮೆ ಲಾಭಗಳಿಸಿ ಹೆಚ್ಚಿನ ಸದಸ್ಯರನ್ನು ಆಕರ್ಷಿಸುತ್ತಿದ್ದಂತೆ ರಾಜಕೀಯ ನಾಯಕರು ಮತ್ತು ಹಲವು ಪಟ್ಟಭದ್ರರು ಚುನಾವಣೆಯ ಮೂಲಕ ಆಡಳಿತ ಮಂಡಳಿಯಲ್ಲಿ ಸೇರಿಕೊಳ್ಳುತ್ತಾರೆ. ತಮಗೆ ಬೇಕಾದವರಿಗೆ, ಬೇರೆಯವರ ಹೆಸರಲ್ಲಿ ವೈಯಕ್ತಿಕ ಉಪಯೋಗಕ್ಕೆ, ಬೇನಾಮಿಯಾಗಿ, ಸಾಲದ ರೂಪದಲ್ಲಿ ಬ್ಯಾಂಕಿನ ಹಣ ಬಿಡುಗಡೆಯಾಗುತ್ತದೆ. ಆ ಹಣಕ್ಕೆ ತಕ್ಕಂತೆ ಸುಳ್ಳು ಠೇವಣಿದಾರರ ಹೆಸರನ್ನು ಸೇರಿಸಿ ಠೇವಣಿಯ ಲೆಕ್ಕವನ್ನು ತೋರಿಸುತ್ತಾರೆ. ಈ ಬ್ಯಾಂಕುಗಳಲ್ಲಿ ಹೆಚ್ಚಿನ ಬಡ್ಡಿ ಆಸೆಯನ್ನು ತೋರಿಸಿ ಠೇವಣಿಯನ್ನು ಸಂಗ್ರಹಿಸುತ್ತಾರೆ. ಈ ಬಡ್ಡಿ ಆಸೆಗೆ ಹಿರಿಯ ನಾಗರಿಕರು ಸೇರಿದಂತೆ ಠೇವಣಿದಾರರು ಹೆಚ್ಚೇ ಇರುತ್ತಾರೆ. ಜೊತೆಗೆ ವಾಣಿಜ್ಯ ಬ್ಯಾಂಕುಗಳು ಕೊಡಲಾಗದ ವಿವಿಧ ಉದ್ದೇಶದ ಸಾಲವನ್ನು ಈ ಬ್ಯಾಂಕುಗಳು ಹೆಚ್ಚಿನ ಬಡ್ಡಿಗೆ ಧಾರಾಳವಾಗಿ ಕೊಡುತ್ತಾರೆ. ಇದರಿಂದಾಗಿ ಬ್ಯಾಂಕಿಗೆ ಸದಸ್ಯರ ಸಂಖ್ಯೆ ಹೆಚ್ಚಾಗಲು ಅವಕಾಶವಾಗಿ ಚುನಾವಣೆಯಲ್ಲಿ ರಾಜಕೀಯದ ಅಗತ್ಯ ಪ್ರಾಧಾನ್ಯತೆಗೆ ಬರುತ್ತದೆ. ಸಹಕಾರ ಇಲಾಖೆಯು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವುದರಿಂದ ರಾಜಕೀಯ ವ್ಯಕ್ತಿಗಳಿಗೆ ಸಂಬಂಧ ಸುಲಭವಾಗಿ ಚುನಾವಣೆಯಲ್ಲಿ ಮತ್ತು ಲೆಕ್ಕಪತ್ರ ತಪಾಸಣೆಯಲ್ಲಿ ಶಿಫಾರಸು ಅಥವಾ ಭ್ರಷ್ಟಾಚಾರ ಕೆಲಸ ಮಾಡುತ್ತದೆ. ಈ ಬ್ಯಾಂಕುಗಳ ಮೇಲೆ ಈಗ ಆರ್ಬಿಐಗೆ ಸೀಮಿತ ಅಧಿಕಾರ ಮಾತ್ರ ಇರುತ್ತದೆ. ಈ ಬ್ಯಾಂಕುಗಳ ಅವ್ಯವಹಾರಗಳು ಗಮನಕ್ಕೆ ಬಂದರೂ ಶೀಘ್ರವಾಗಿ ಮತ್ತು ಪೂರ್ಣವಾಗಿ ತನಿಖೆ ನಡೆಸಲು ಹಲವಾರು ತೊಂದರೆಗಳಿವೆ. ಹಲವಾರು ವರ್ಷಗಳಿಂದ ಇಂತಹ ಬ್ಯಾಂಕುಗಳಲ್ಲಿ ಆವ್ಯವಹಾರಗಳು ನಡೆಯಲು ಆಡಳಿತ ಮಂಡಳಿಗಳು ಕಾರಣವೆಂದು ಗಮನಕ್ಕೆ ಬಂದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಪರಿಹಾರ ಕಾಣದೆ ಠೇವಣಿದಾರರು ನರಳಬೇಕಾಗಿತ್ತು. ಬ್ಯಾಂಕುಗಳು ಇತ್ತ ದಿವಾಳಿ ಎಂದು ಘೋಷಿಸುತ್ತಲೂ ಇರಲಿಲ್ಲ, ಅತ್ತ ಠೇವಣಿದಾರರ ಹಣವನ್ನು ವಾಪಸು ಮಾಡುತ್ತಿರಲಿಲ್ಲ. ಇಂತಹ ಹಗರಣಗಳನ್ನು ತಡೆಯಲು ಕೇಂದ್ರ ಸರ್ಕಾರವು ತಡವಾಗಿಯಾದರೂ ಮನಸ್ಸು ಮಾಡಿದ್ದು ಆರ್ಬಿಐ ಅಡಿ ವಾಣಿಜ್ಯ ಬ್ಯಾಂಕುಗಳೊಂದಿಗೆ ಪಟ್ಟಣ ಸಹಕಾರಿ ಬ್ಯಾಂಕುಗಳನ್ನು ಸಹ ತಂದಿರುವುದು ತುಂಬಾ ಸಮಾಧಾನಕರ ವಿಷಯ. ಮುಂದಿನ ದಿನಗಳಲ್ಲಾದರೂ ಹಗರಣಕ್ಕೆ ಹೊಸ ದಾರಿ ಹುಡುಕಿ ಅವ್ಯವಹಾರ ನಡೆಯುವುದಿಲ್ಲ ಎಂಬ ನಂಬಿಕೆಯೊಂದಿಗೆ ಠೇವಣಿದಾರರಿಗೆ ಪ್ರಾಮಾಣಿಕ, ವಿಶ್ವಾಸ ಮತ್ತು ಭರವಸೆಯ ಸೇವೆ ಸಿಗಲಿದೆ ಎಂದು ಆಶಿಸೋಣ.
ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...
Comments
Post a Comment