"ಪತ್ರಂ ಪುಷ್ಪಂ ಫಲಂ ತೋಯಂ" ಎಂಬ ಭಗವದ್ಗೀತೆಯ ವಾಕ್ಯವನ್ನು ಸೂಚ್ಯವಾಗಿ ಹೇಳಿರುವ ಭಕ್ತಿ ಸಮರ್ಪಣೆಯನ್ನು ಈ ಕೆಳಕಂಡಂತೆ ನಾಲ್ಕು ರೀತಿಗಳಾಗಿ ವಿಶ್ಲೇಷಿಸಬಹುದು.
ಪತ್ರಂ - ಶ್ರೀಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳಲು ತುಲಾಭಾರ ಮಾಡಿದಾಗ ಸತ್ಯಭಾಮೆಯ ತನ್ನಲ್ಲಿರುವ ಆಗರ್ಭ ಚಿನ್ನ, ವಜ್ರಗಳ, ವೈಡೂರ್ಯಗಳ ಆಭರಣಗಳಿಗೆ ಸಮತೂಕನಾಗದ ಶ್ರೀಕೃಷ್ಣ ರುಕ್ಮಿಣಿಯು ಭಕ್ತಿಯಿಂದ ಸಮರ್ಪಿಸಿದ ತುಳಸಿಯೆಂಬ ಪತ್ರೆಗೆ ಒಲಿದು ಬಂದಿದ್ದು ಗಮನಿಸಿದಾಗ ದೇವರಿಗೆ ಆಭರಣಗಳಿಂದ ಮೆಚ್ಚಿಸಲಾಗುವುದಿಲ್ಲ ಎಂದು ಮನವರಿಕೆಯಾಗುತ್ತದೆ.
ಪುಷ್ಪಂ - ಗಜೇಂದ್ರನೆಂಬ ಆನೆಯ ಕಾಲನ್ನು ಕೊಳದಲ್ಲಿದ್ದ ಮೊಸಳೆಯು ಕಚ್ಚಿ ಹಿಡಿದಾಗ ತನ್ನ ಪೂರ್ವಜನ್ಮದ ಪುಣ್ಯ ಸ್ಮರಣೆಯಿಂದ ನೆನೆದು ದೇವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ ಕೊಳದಲ್ಲಿಯೇ ಕೈಗೆ ಸಿಕ್ಕ ತಾವರೆಯನ್ನು ದೇವರಿಗೆ ಒಪ್ಪಿಸಿದಾಗ, ಮಹಾವಿಷ್ಣುವು ಗಜೇಂದ್ರನನ್ನು ರಕ್ಷಿಸಿದ ಕಥೆ ಎಲ್ಲರಿಗೂ ಗೊತ್ತಿರುವುದೇ.
ಫಲಂ - ರಾಮಾಯಣ ಕಾಲದಲ್ಲಿ ಶಬರಿಯು ಅನನ್ಯ ಭಕ್ತಿಯಿಂದ ಶ್ರೀರಾಮನಿಗೆ ಉತ್ಕೃಷ್ಟ ಹಣ್ಣು ಕೊಡುವ ಉದ್ದೇಶದಿಂದ ಪ್ರತಿ ಹಣ್ಣನ್ನು ಕಚ್ಚಿ ರುಚಿಯನ್ನು ನೋಡಿ ಚೆನ್ನಾಗಿರುವುದನ್ನು ಆರಿಸಿ ಸಮರ್ಪಿಸಿ ಮೋಕ್ಷವನ್ನು ಪಡೆದುದನ್ನು ಕಂಡಾಗ ದೇವರಿಗೆ ಭಕ್ತಿಯ ಹೊರತು ಬೇರೇನು ಬೇಡ ಎಂದು ತಿಳಿಯುತ್ತದೆ.
ತೋಯಂ - ಬಲಿಚಕ್ರವರ್ತಿಯು ದಾನ ಬೇಡಿದ ವಾಮನನಿಗೆ ತಾನು ನಿಂತಿರುವ ಭೂಮಿಯನ್ನು ಸಹ ತೋಯಂ ಎಂದರೆ ಒಂದು ತೊಟ್ಟು ನೀರಿನ ಮೂಲಕ ದಾನ ಮಾಡಿ ಪಾತಾಳಕ್ಕೆ ಹೊರಟುಹೋದ ಕಥೆಯನ್ನು ಕೇಳಿದ್ದೇವೆ ಅದನ್ನು ದೀಪಾವಳಿ ಹಬ್ಬವಾಗಿ ಆಚರಣೆ ಮಾಡುತ್ತಿದ್ದೇವೆ. ಈಗಲೂ ಸಹ ಯಾವುದೇ ದಾನ ಸಮರ್ಪಣೆ ನೀರಿನ ತೊಟ್ಟಿನೊಂದಿಗೆ ಮಾಡುವುದು ಪದ್ಧತಿಯಾಗಿದೆ.
ಈ ಕಥಾ ದೃಷ್ಟಾಂತಗಳ ಮೂಲಕ ದೇವರು ನೀವು ಕೊಡುವ ಯಾವುದೇ ಬೆಲೆಬಾಳುವ ವಸ್ತುಗಳನ್ನು ಆಹಾರ ಪದಾರ್ಥಗಳನ್ನು ಅಪೇಕ್ಷಿಸುವುದಿಲ್ಲ ಬೇಕಾಗಿರುವುದು ನಿಮ್ಮ ನಿಷ್ಕಲ್ಮಶ ಭಕ್ತಿ ಮಾತ್ರ. ಭಕ್ತಿಯೆಂದರೆ ನಿಮ್ಮನ್ನು ನೀವು ದೇವರಿಗೆ ಸಮರ್ಪಣೆ ಮಾಡಿಕೊಳ್ಳುವುದು ಎಂದರ್ಥ. ಅಂದರೆ ಯಾವುದೇ ಕೆಲಸವನ್ನು ಮಾಡುವುದಾದರೂ ಅದನ್ನು ಶ್ರದ್ಧೆ ಮುಖ್ಯ.ಭಕ್ತಿಯಿಂದ ಮಾಡಿದಾಗ ಮಾತ್ರ ಹಿಡಿದ ಕೆಲಸ ಕೈಗೂಡುತ್ತದೆ.
ದೇವರು ಭಕ್ತಿಯನ್ನು ಬಿಟ್ಟು ಬೇರೆ ಏನನ್ನು ಅಪೇಕ್ಷಿ ಸುವುದಿಲ್ಲ
ReplyDeleteThe story gives more interesting information. Thank you.
ReplyDeleteಭಗವದ್ಗೀತೆಗೆ ಟಿಪ್ಪಣಿ ಬರೆದ, ಶ್ರೀ ಶಂಕರರಾದಿಯಾಗಿ ಯಾವ ಅನುವಾದಕರಿಗೂ, ಮತ್ತು ಸ್ವತಃ ವೇದವ್ಯಾಸರಿಗೂ ಗೋಚರಿಸದ ಅರ್ಥ ವಿಶ್ಲೇಷಣೆ ಎನ್ನಲಡ್ಡಿಯಿಲ್ಲ. ಹಿರಿಯಣ್ಣ ಕೆ ಪಿ
ReplyDelete